ಕಾಡುಬೆಳದಿಂಗಳು

ಅಂತರಾಳ ಬೇರುಗಳ ಭಾವಸ್ಪರ್ಶಕೆ
ಸಹ್ಯಾದ್ರಿಯ ತುಂಬೆಲ್ಲ ಹಸಿರು.
ಎಣ್ಣೆ ಹಚ್ಚಿ ಎರೆದ ಮಿರುಗು
ಗತ್ತಿನ ಮಾತು ವಯ್ಯಾರ
ಗಗನ ಚುಂಬಿಸುವ ಹಂಬಲ.

ನೂರು ಸಾವಿರ ಮಾತುಗಳ
ಒಳಗೊಳಗಿನ ಚಡಪಡಿಕೆಗೆ ಮೌನ
ಆದರೂ ಎಷ್ಟೊಂದು ಸ್ಪಷ್ಟ
ಕಡಲ ನೆರೆತೊರೆ ಏರುಬ್ಬರ
ಎಷ್ಟೊಂದು ತಿಳಿ ಒರತೆಯನೀರು
ಪಚ್ಚೆ ಹಸಿರು ಹೊಳೆವ ಕಣ್ಣಿನ
ಈ ಸಹ್ಯಾದ್ರಿ ಕುಸುಮ ಮಾಲೆ.

ಮಾಗಿ ಚಳಿ ಮಂಜು ಮುಸುಕು
ಬಿರುಸಿನ ಓಡಾಟದ ಕೆಲಸದ ಹುಡುಗಿ
ಸಹ್ಯಾದ್ರಿ
ಚಳಿ ಮಳೆ ಬಿಸಿಲೆಲ್ಲ ಬಲುದೂರ
ಮುಖ ತುಂಬ ಮುಗ್ದ ನಗು
ಕನಸುಕಣ್ಣಿನ ಹುಡುಗಿಗೆ
ಸೂರ್ಯ ಬರುತ್ತಾನೋ ಇಲ್ಲೋ!

ಕತ್ತಲಲಿ ಕರಗದ ಮನಸಿಗೆ
ಒಂದಿಷ್ಟು ನೆಮ್ಮದಿ ಏಕಾಂತ,
ತನ್ನೊಳಗಿನ ಪಿಸುಮಾತುಗಳಿಗೆ
ತಾನೇ ಕೆನೆಬೆಳಕಾಗಿ ಉಸಿರಾಗಿ-
ಸಹ್ಯಾದ್ರಿ ತುಂಬೆಲ್ಲ ತಂಪು ಬೆಳದಿಂಗಳು.
*****

Leave a Reply

 Click this button or press Ctrl+G to toggle between Kannada and English

Your email address will not be published. Required fields are marked *

Previous post ಮಹಾಪ್ರಸ್ಥಾನವನ್ನು ಇನ್ನೊಮ್ಮೆ ಓದಿದಾಗ
Next post ಅನುಕರಣೆ

ಸಣ್ಣ ಕತೆ

  • ಅವನ ಹೆಸರಲ್ಲಿ

    ಎಂದಿನಂತೆ ಬೆಳಿಗ್ಗೆ ಮಾಮೂಲಿ ಸಮಯಕ್ಕೆ ಎಚ್ಚರವಾದರೂ, ಎಂದಿನ ಉಲ್ಲಾಸ ನನ್ನಲ್ಲಿರಲಿಲ್ಲ. ತಿರುಗುತ್ತಿರುವ ಫ್ಯಾನಿನತ್ತ ದೃಷ್ಟಿ ಇಟ್ಟು ಮಲಗಿಕೊಂಡೇ ಆಲೋಚನೆ ಮಾಡುತ್ತಿದ್ದೆ. ನಿನ್ನೆ ತಾನೇ ಸರಕಾರಿ ಕೆಲಸದಿಂದ ನಿವೃತ್ತಿಯಾಗಿ… Read more…

  • ತನ್ನೊಳಗಣ ಕಿಚ್ಚು

    ಶಕೀಲಾ ಇನ್ನೂ ಮನೆಗೆ ಬಂದಿಲ್ಲ ಮೈಮೇಲೆ ಮುಳ್ಳುಗಳು ಎದ್ದಂಗಾಗದೆ. ಅಸಲು ಜೀವಂತ ಅದಾಳೋ? ಉಳಿದಾಳೆ ಜಿಂದಾ ಅಂಬೋದಾದ್ರೆ ಎಲ್ಲಿ? ಕತ್ಲೆ ಕವ್ಕತಾ ಅದೆ. ಈಗಷ್ಟೇ ಒಂದು ಗಂಟೆ… Read more…

  • ಆ ರಾಮ!

    ಮೇಲೆ ವಿಶಾಲವಾದ ನೀಲಮಯ ನಭೋಮಂಡಲ. ಲೋಕವನ್ನೆ ಅವಲೋಕಿಸ ಹೊರಟವನಂತೆ ದಿನಮಣಿಯು ದೀಪ್ತಿಯುಳ್ಳವನಾಗಿ ಮೂಡಣದಲ್ಲಿ ನಿಂತಿದ್ದಾನೆ. ಅವನ ಪ್ರಖರ ಕಿರಣಗಳು ನೀರಿನೆಲೆಗಳ ಮೇಲೆ ಕೆಳಗು ಮೇಲಾಗುತ್ತಿವೆ. ಚಿಕ್ಕವರು ದೊಡ್ಡವರು… Read more…

  • ಕರಿಗಾಲಿನ ಗಿರಿರಾಯರು

    ಪ್ರಜಾಪೀಡಕನಾದ ಮೈಸೂರಿನ ಟೀಪೂ ಸುಲ್ತಾನನನ್ನು ಶ್ರೀರಂಗ ಪಟ್ಟಣದ ಯುದ್ಧದಲ್ಲಿ ಕೊಂದು ಅವನ ರಾಜ್ಯವನ್ನು ಇಂಗ್ಲಿಶ್ ಸರಕಾರ ದವರು ತಮ್ಮ ವಶಕ್ಕೆ ತೆಗೆದುಕೊಂಡ ಕಾಲಕ್ಕೆ, ಉತ್ತರಕರ್ನಾಟಕದ ನಿವಾಸಿಗಳಾದ ಅನೇಕ… Read more…

  • ಕಲಾವಿದ

    "ನನಗದು ಬೇಕಿಲ್ಲ. ಬೇಕಿಲ್ಲ! ಸುಮ್ಮನೆ ಯಾಕೆ ಗೋಳು ಹುಯ್ಯುತ್ತೀಯಮ್ಮಾ?" "ಹೀಗೇ ಎಷ್ಟು ದಿನ ಮನೆಯಲ್ಲೇ ಕುಳಿತಿರುವೆ, ಮಗು?" "ಇಷ್ಟು ದಿನವಿರಲಿಲ್ಲವೇನಮ್ಮ-ಇನ್ನು ಮೇಲೆಯೂ ಹಾಗೆಯೇ, ಹೊರಗಿನ ಪ್ರಪಂಚಕ್ಕಿಂತ ನನ್ನ… Read more…

cheap jordans|wholesale air max|wholesale jordans|wholesale jewelry|wholesale jerseys